ಗಜಲ್

ಅಮ್ಮ ಪಾತ್ರೆ ಹಿಡಿದು ಬಡಿಸಿದಳು.
ಪಾಯಸ ಅಲ್ಲಿ ಬರೀ ಪ್ರೀತಿ ಸಿಹಿ.

ಅಪ್ಪ ಕನ್ನಡಿ ಹಿಡಿದು ತೋರಿಸಿದ ಬಿಂಬಗಳ
ಎಲ್ಲವೂ ಕಾಲಘಟ್ಟದಲ್ಲಿ ಕರಗುವ ಹನಿಗಳು.

ಅಕ್ಕ ತಬ್ಬಿದಳು ಲೋಕದ ಮಾಯೆಯ
ಪ್ರೇಮ ಕರಗಿ ನೀರಾಗಿ ನದಿಯಾದಳು.

ತಂಗಿ ಹಂಚಿದಳು ಸ್ನೇಹದ ದಿವ್ಯತೆ
ಸಾವಿರಾರು ಕನಸುಗಳು ಆಕಾರಗೊಂಡವು.

ತಮ್ಮ ಕೂಡಿಕಳೆಯುವದರಲ್ಲಿ ಬಿಚ್ಚಿಕೊಂಡ
ಎಲ್ಲ ಮರ್ಮರಗಳು ಬದುಕು ಇಡಿ ಗಂಟಾಯಿತು.

ಅಣ್ಣ ಹಂಚುತ್ತ ಹೋದ ಒಲವ
ಅಲ್ಲಿಂದ ಇಲ್ಲಿಗೆ ಹರಿದಾಡಿದವು ಹೆಜ್ಜೆಗಳು.

ದಿನಗಳ ನೋಡು ನೋಡುತ್ತಲೆ ಕಳೆದ ಕಾಲ
ನಾನೀಗ ಅವರೆಲ್ಲರ ಪ್ರತಿದೀಪವಾಗಿರುವೆ.

ತುಂಬಿದ ಪಾತ್ರೆ ಎದೆಯ ಹಾಡಿಗೆ
ಹಾಲನುಣಿಸಿ ದನಿ ಏರಿಸಿದೆ ಆಪ್ತತೆಗೆ

ಹೀಗೆ ದೇವರು ಕೊಟ್ಟ ಮಧು ಚೆಲ್ಲು
ಹರಡಿ ಹಾಸಿವೆ ಆಗಸದ ತುಂಬ ಚಿಕ್ಕಿಗಳು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇನ್ನೆಲ್ಲಿ ಬಾಳಿನುಷೆ?
Next post ಸಂಸರಣ

ಸಣ್ಣ ಕತೆ

  • ಒಂಟಿ ತೆಪ್ಪ

    ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

  • ಇನ್ನೊಬ್ಬ

    ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

cheap jordans|wholesale air max|wholesale jordans|wholesale jewelry|wholesale jerseys